Volume 3

ಅಯೋಧ್ಯಾಕಾಂಡ

  • ಶ್ರೀರಾಮನ ಆಜ್ಞೆಯಂತೆ ಗುಹನು ನಾವೆಯನ್ನು ಸಿದ್ಧಗೊಳಿಸಿದುದು : ಶ್ರೀರಾಮನು ಸುಮಂತ್ರನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹಿಂದಿರುಗಲು ಆಜ್ಞಾಪಿಸಿದುದು : ಸುಮಂತ್ರನೊಡನೆ ತಂದೆ-ತಾಯಿಗಳಿಗೆ ಶ್ರೀರಾಮನು ಸಂದೇಶವನ್ನು ಕಳುಹಿಸಿಕೊಟ್ಟುದು : ಅರಣ್ಯಕ್ಕೆ ಬರುವೆನೆಂದು ಹಠ ಹಿಡಿದ ಸುಮಂತ್ರನಿಗೆ ಯುಕ್ತಿಪೂರ್ವಕವಾಗಿ ಸಮಾಧಾನ ಹೇಳಿ ಅಯೋಧ್ಯೆಗೆ ಹಿಂದಿರುಗುವಂತೆ ಹೇಳಿದುದು : ಸೀತಾದೇವಿಯಿಂದ ಗಂಗೆಯ ಪ್ರಾರ್ಥನೆ : ನಾವೆಯಿಂದಿಳಿದು ಶ್ರೀರಾಮಾದಿಗಳು ವತ್ಸದೇಶಕ್ಕೆ ಪ್ರಯಾಣ ಮಾಡಿ ಸಾಯಂಕಾಲವಾಗುತ್ತಲೇ ವೃಕ್ಷವೊಂದರ ಕೆಳಗೆ ಬಿಡಾರಮಾಡಿದುದು
  • ಕೈಕೇಯಿಯಿಂದ ಕೌಸಲ್ಯೆಯೇ ಮೊದಲಾದವರಿಗೆ ತೊಂದರೆಯಾಗವುದೆಂದು ಹೇಳಿ ಶ್ರೀರಾಮನು ಲಕ್ಷ್ಮಣನನ್ನು ಅಯೋಧ್ಯೆಗೆ ಕಳುಹಿಸಲು ಪುನಃ ಪ್ರಯತ್ನಿಸಿದುದು : ಶ್ರೀರಾಮನಿಲ್ಲದೇ ತನ್ನ ಜೀವವೇ ಉಳಿಯಲಾರದೆಂದು ಹೇಳಿ ಲಕ್ಷ್ಮಣನು ಅಯೋಧ್ಯೆಗೆ ಹಿಂದಿರುಗಲು ನಿರಾಕರಿಸಿದುದು : ಶ್ರೀರಾಮನು ಲಕ್ಷ್ಮ ಣನಿಗೆ ತನ್ನ ಜೊತೆಯಲ್ಲಿಯೇ ಇರಲು ಹೇಳಿ ಸಮಾಧಾನಗೊಳಿಸಿದುದು
  • ರಾಮ-ಲಕ್ಷ್ಮಣರು ಸೀತೆಯೊಡನೆ ಪ್ರಯಾಗದಲ್ಲಿ ಗಂಗಾ-ಯಮುನೆಯರ ಸಂಗಮದ ಸಮೀಪದಲ್ಲಿದ್ದ ಭರದ್ವಾಜಾಶ್ರಮಕ್ಕೆ ಹೋದುದು : ಭರದ್ವಾಜರಿಂದ ಸತ್ಕಾರ : ಭರದ್ವಾಜರು ಶ್ರೀರಾಮನಿಗೆ ಚಿತ್ರಕೂಟಪರ್ವತದಲ್ಲಿರುವಂತೆ ಆದೇಶವನ್ನಿತ್ತುದು : ಚಿತ್ರಕೂಟಪರ್ವತದ ಮಹಿಮೆಯ ವರ್ಣನೆ
  • ಭರದ್ವಾಜಮಹರ್ಷಿಗಳು ಸೀತಾ-ರಾಮ-ಲಕ್ಷ್ಮಣರಿಗೆ ಸ್ವಸ್ತಿವಾಚನಮಾಡಿ ಚಿತ್ರಕೂಟ ಪರ್ವತದ ಮಾರ್ಗವನ್ನು ತೋರಿಸಿಕೊಟ್ಟುದು : ಎಲ್ಲರ ಅನುಮತಿಯನ್ನೂ ಪಡೆದು ಶ್ರೀರಾಮನು ದೋಣಿಯ ಮೂಲಕವಾಗಿ ಯಮುನಾನದಿಯನ್ನು ದಾಟಿದುದು : ಸೀತೆಯು ಯಮುನಾನದಿಯನ್ನು ಪ್ರಾರ್ಥಿಸಿದುದು : ಮೂವರೂ ಯಮುನಾನದಿಯ ತೀರದ ಮಾರ್ಗವನ್ನೇ ಹಿಡಿದು ಒಂದು ಕ್ರೋಶದವರೆಗೆ ಪ್ರಯಾಣಮಾಡಿ ಯಮುನಾನದಿಯ ತೀರಪ್ರದೇಶದಲ್ಲಿ ಸಮತಲವಿದ್ದ ಸ್ಥಳದಲ್ಲಿ ರಾತ್ರಿ ತಂಗಿದುದು
  • ರಾಮ-ಲಕ್ಷ್ಮಣರು ಅರಣ್ಯದ ಸೊಬಗನ್ನು ನೋಡುತ್ತಾ ಸೀತೆಗೂ ತೋರಿಸುತ್ತಾ ಚಿತ್ರಕೂಟ ಪರ್ವತವನ್ನು ಸೇರಿದುದು : ವಾಲ್ಮೀಕಿಗಳ ಸಂದರ್ಶನ : ಲಕ್ಷ್ಮಣನು ಅಣ್ಣನ ಆಜ್ಞೆಯಂತೆ ಪರ್ಣಶಾಲೆಯನ್ನು ನಿರ್ಮಿಸಿದುದು : ವಾಸ್ತುಶಾಂತಿಯನ್ನು ಮಾಡಿದನಂತರ ಎಲ್ಲರೂ ಕುಟೀರವನ್ನು ಪ್ರವೇಶಿಸಿದುದು
  • ಸುಮಂತ್ರನು ಅಯೋಧ್ಯೆಗೆ ಹಿಂದಿರುಗಿದುದು : ಅವನಿಂದ ಶ್ರೀರಾಮನ ಸಂದೇಶವನ್ನು ಕೇಳಿದ ನಗರವಾಸಿಗಳ ವಿಲಾಪ : ದಶರಥ-ಕೌಸಲ್ಯೆಯರ ಮೂರ್ಛೆ : ಅಂತಃಪುರಸ್ತ್ರೀಯರ ಆರ್ತನಾದ
  • ದಶರಥನ ಆಜ್ಞೆಯಂತೆ ಸುಮಂತ್ರನು ರಾಮ-ಲಕ್ಷ್ಮಣರ ಸಂದೇಶವನ್ನು ತಿಳಿಸಿದುದು
  • ಶ್ರೀರಾಮನ ಅರಣ್ಯವಾಸದಿಂದ ಅಯೋಧ್ಯಾ ಪಟ್ಟಣದಲ್ಲಾಗಿರುವ ದುರವಸ್ಥೆಯನ್ನು ಸುಮಂತ್ರನು ರಾಜನಿಗೆ ವಿವರಿಸಿದುದು
  • ಕೌಸಲ್ಯೆಯ ವಿಲಾಪ : ಸುಮಂತ್ರನಿಂದ ಸಮಾಧಾನ
  • ಕೌಸಲ್ಯಾದೇವಿಯ ವಿಲಾಪ : ದಶರಥನ ನಿಂದನೆ
  • ದುಃಖತಪ್ತನಾದ ದಶರಥನು ಕೌಸಲ್ಯೆಯ ಕ್ಷಮೆ ಕೇಳಿದುದು : ಕೌಸಲ್ಯೆಯು ರಾಜನ ಕಾಲುಗಳಿಗೆ ಬಿದ್ದು ತಪ್ಪನ್ನು ಕ್ಷಮಿಸುವಂತೆ ಪ್ರಾರ್ಥಿಸಿದುದು
  • ದಶರಥನ ಶೋಕ : ಋಷಿಕುಮಾರನನ್ನು ವಧಿಸಿದ ವೃತ್ತಾಂತವನ್ನು ರಾಜನು ಕೌಸಲ್ಯೆಗೆ ಹೇಳಿದುದು
  • ದಶರಥನು ಕೌಸಲ್ಯೆಗೆ ಋಷಿಕುಮಾರನ ವಧೆಯಿಂದಾಗಿ ಅವನ ವೃದ್ಧರಾದ ತಂದೆ-ತಾಯಿಗಳಿಗೆ ಉಂಟಾದ ದುಃಖವನ್ನೂ ಅವರಿತ್ತ ಶಾಪವನ್ನೂ ವಿವರಿಸಿ ಹೇಳಿದುದು : ಕೌಸಲ್ಯೆಯ ಸಮೀಪದಲ್ಲಿ ವಿಲಪಿಸುತ್ತಲೇ ಇದ್ದು ಅರ್ಧರಾತ್ರಿಯ ಸಮಯದಲ್ಲಿ ಅವಸಾನಹೊಂದಿದುದು
  • ಬೆಳಗಾಗುತ್ತಲೇ ವಂದಿ-ಮಾಗಧರು ದಶರಥನನ್ನು ಸ್ತುತಿಸಿದುದು : ದಶರಥನು ಅವಸಾನಹೊಂದಿದ ವಾರ್ತೆಯನ್ನು ಕೇಳಿ ರಾಣಿಯರು ವಿಲಪಿಸಿದುದು
  • ಕೌಸಲ್ಯೆಯ ವಿಲಾಪ : ಕೈಕೇಯಿಯ ನಿಂದನೆ : ಮಂತ್ರಿಗಳು ರಾಜನ ಶರೀರವನ್ನು ಎಣ್ಣೆಯ ಕೊಪ್ಪರಿಗೆಯಲ್ಲಿಟ್ಟುದು : ನಾಗರಿಕರ ಶೋಕ
  • ಮಾರ್ಕಂಡೇಯರೇ ಮೊದಲಾದ ಮಹರ್ಷಿಗಳು ರಾಜನಿಲ್ಲದ ದೇಶದ ದುಃಸ್ಥಿತಿಯನ್ನು ವರ್ಣಿಸಿದುದು : ಕೂಡಲೇ ಯಾರನ್ನಾದರೂ ರಾಜನನ್ನಾಗಿ ಮಾಡುವಂತೆ ವಸಿಷ್ಠರಿಗೆ ಆದೇಶ ನೀಡಿದುದು
  • ವಸಿಷ್ಠರ ಆದೇಶದಂತೆ ರಾಜಗೃಹಕ್ಕೆ ಐವರು ರಾಜದೂತರ ಪ್ರಯಾಣ
  • ಭರತನ ಚಿಂತೆ : ಮಿತ್ರರಿಂದ ಸಾಂತ್ವನ : ಭರತನು ಮಿತ್ರರಿಗೆ ತಾನು ಕಂಡ ಭಯಂಕರ ಸ್ವಪ್ನವನ್ನು ವಿವರಿಸಿ ಹೇಳಿದುದು
  • ಅಯೋಧ್ಯೆಯ ದೂತರು ಭರತನಿಗೂ ಭರತನ ಸೋದರಮಾವನಿಗೂ ಅನರ್ಘವಾದ ವಸ್ತುಗಳನ್ನು ಅರ್ಪಿಸಿದುದು : ವಸಿಷ್ಠರ ಸಂದೇಶವನ್ನು ತಿಳಿಯಪಡಿಸಿದುದು : ಭರತನು ತಂದೆಯೇ ಮೊದಲಾದವರ ಕುಶಲವನ್ನು ಕೇಳಿ ತಾತನ ಅನುಮತಿಯನ್ನು ಪಡೆದು ಶತ್ರುಘ್ನನೊಡನೆ ಅಯೋದ್ಯೆಗೆ ಪ್ರಯಾಣಹೊರಟುದು
  • ಸೈನ್ಯದೊಡನೆ ಭರತನ ಪ್ರಯಾಣ : ನದೀ-ನದ-ಪರ್ವತಗಳನ್ನು ದಾಟಿ ಉಜ್ಜಹಾನಾನಗರದ ಉದ್ಯಾನವನದಲ್ಲಿ ಸೈನ್ಯಕ್ಕೆ ನಿಧಾನವಾಗಿ ಬರುವಂತೆ ಆಜ್ಞೆಮಾಡಿ ತೀವ್ರಗತಿಯಿಂದ ಅಯೋಧ್ಯೆಗೆ ಹೊರಟುದು : ಸಾಲವನವನ್ನು ದಾಟಿ ಅಯೋಧ್ಯೆಯ ಸಮೀಪಕ್ಕೆ ಬಂದು ಅಲ್ಲಿಯ ದುರವಸ್ಥೆಯನ್ನು ಗಮನಿಸಿದುದು : ಸಾರಥಿಯೊಡನೆ ದುಃಖವನ್ನು ತೋಡಿಕೊಳ್ಳುತ್ತಾ ರಾಜಭವನವನ್ನು ಪ್ರವೇಶಿಸಿದುದು
  • ಭರತನು ಕೈಕೇಯಿಯ ಅಂತಃಪುರದಲ್ಲಿ ದಶರಥನ ಮರಣವಾರ್ತೆಯನ್ನು ಕೇಳಿ ಬಹಳವಾಗಿ ವಿಲಪಿಸಿದುದು : ಶ್ರೀರಾಮನು ಅರಣ್ಯಕ್ಕೆ ಹೋದನೆಂಬ ವೃತ್ತಾಂತವನ್ನು ತಾಯಿಯಿಂದಲೇ ಕೇಳಿ ಭ್ರಾಂತನಾದುದು
  • ಭರತನಿಂದ ಕೈಕೇಯಿಯ ಧಿಕ್ಕಾರ : ಅವಳ ಮೇಲೆ ಕೋಪಗೊಂಡುದು
  • ಭರತನು ಕೈಕೇಯಿಯನ್ನು ಬಹಳವಾಗಿ ನಿಂದಿಸಿದುದು
  • ಕೌಸಲ್ಯೆಯ ಮುಂದೆ ಭರತನ ಶಪಥ
  • ದಶರಥನ ಅಂತ್ಯೇಷ್ಟಿಸಂಸ್ಕಾರ
  • ಭರತನು ತಂದೆಯ ಶ್ರಾದ್ಧಕರ್ಮದಲ್ಲಿ ಬ್ರಾಹ್ಮಣರಿಗೆ ಧನ-ಕನಕ-ವಸ್ತುಗಳನ್ನು ದಾನಕೊಟ್ಟುದು : ಹದಿಮೂರನೆಯ ದಿವಸ ಅಸ್ಥಿಸಂಚಯನದ ಕರ್ಮವನ್ನು ಮಾಡಲು ಹೋದ ಭರತ-ಶತ್ರುಘ್ನರು ಚಿತಾಭೂಮಿಯ ಮೇಲೆ ನಿಂತು ರೋದನಮಾಡಿದುದು : ವಸಿಷ್ಠರೂ ಮತ್ತು ಮಂತ್ರಿಗಳೂ ಸಮಾಧಾನಗೊಳಿಸಿದುದು
  • ಕ್ರುದ್ಧನಾದ ಶತ್ರುಘ್ನನಿಂದ ಮಂಥರೆಯ ಭರ್ತ್ಸನೆ : ಭರತನಿಂದ ಸಾಂತ್ವನ
  • ರಾಜ್ಯಭಾರವನ್ನು ವಹಿಸಿಕೊಳ್ಳುವಂತೆ ಮಂತ್ರಿಗಳಿಂದ ಭರತನಿಗೆ ಒತ್ತಾಯ : ಭರತನು ಅಭಿಷೇಕಸಾಮಗ್ರಿಗಳಿಗೆ ಪ್ರದಕ್ಷಿಣೆಮಾಡಿ ಜ್ಯೇಷ್ಠಪುತ್ರನಿಗೇ ರಾಜ್ಯಾಧಿಕಾರವಿರುವುದನ್ನು ಸ್ಪಷ್ಟಪಡಿಸಿ ಶ್ರೀರಾಮನನ್ನು ಕರೆತರಲು ವ್ಯವಸ್ಥೆ ಮಾಡುವಂತೆ ಆಜ್ಞಾಪಿಸಿದುದು
  • ಶಿಲ್ಪಿಗಳಿಂದ-ಅಯೋಧ್ಯೆಯಿಂದ ಗಂಗಾನದಿಯವರೆಗೂ-ಸುರಮ್ಯವಾದ ಶಿಬಿರಗಳ ಮತ್ತು ವಾಪೀಕೂಪಗಳಿಂದ ಯುಕ್ತವಾದ ಸುಖದಾಯಕಗಳಾದ ರಾಜಮಾರ್ಗಗಳ ನಿರ್ಮಾಣ
  • ಪ್ರಾತಃಕಾಲದಲ್ಲಿ ವಂದಿ-ಮಾಗಧರ ಮಂಗಳ ಘೋಷಗಳು : ದುಃಖಗೊಂಡ ಭರತನಿಂದ ತಡೆ : ಸಭಾಭವನದಲ್ಲಿ ಎಲ್ಲರೂ ಸೇರುವಂತೆ ವಸಿಷ್ಠರ ಆದೇಶ
  • ಪಟ್ಟಾಭಿಷಿಕ್ತನಾಗುವಂತೆ ಭರತನಿಗೆ ವಸಿಷ್ಠರ ಆದೇಶ : ಭರತನ ಅಸಮ್ಮತಿ : ಶ್ರೀರಾಮನನ್ನು ಅರಣ್ಯದಿಂದ ಕರೆತರಲು ಸಿದ್ಧವಾಗುವಂತೆ ಎಲ್ಲರಿಗೂ ಆದೇಶ
  • ಭರತನ ವನಯಾತ್ರೆ : ಶೃಂಗಬೇರಪುರದಲ್ಲಿ ಬಿಡಾರ
  • ನಿಷಾದರಾಜನಾದ ಗುಹನು ನದಿಯನ್ನು ರಕ್ಷಿಸುವ ನೆಪದಲ್ಲಿ ಯುದ್ಧಸನ್ನದ್ಧರಾಗಿರುವಂತೆ ತನ್ನ ಜ್ಞಾತಿಗಳಿಗೆ ಆದೇಶ ನೀಡಿ ಸತ್ಕಾರ ಸಾಮಗ್ರಿಗಳನ್ನು ತೆಗೆದುಕೊಂಡು ಭರತನನ್ನು ಸಂದರ್ಶಿಸಿದುದು
  • ಗುಹ-ಭರತರ ಸಂಭಾಷಣೆ : ಭರತನ ದುಃಖ
  • ಗುಹನು ಲಕ್ಷ್ಮಣನ ಸದ್ಭಾವನೆಯನ್ನೂ ಮತ್ತು ವಿಲಾಪವನ್ನೂ ಭರತನಿಗೆ ವಿವರಿಸಿ ಹೇಳಿದುದು
  • ಶ್ರೀರಾಮನ ವಿಷಯವನ್ನು ಕೇಳಿ ಭರತನ ಮೂರ್ಛೆ : ಶತ್ರುಘ್ನ-ಕೌಸಲ್ಯಾ-ಕೈಕೇಯೀ-ಸುಮಿತ್ರೆಯರ ವಿಲಾಪ : ಎಚ್ಚರಗೊಂಡನಂತರ ಭರತನ ಕೇಳಿಕೆಯಂತೆ ಶ್ರೀರಾಮನ ಭೋಜನ, ಶಯ್ಯೆ ಮುಂತಾದ ವಿಷಯವಾಗಿ ಗುಹನಿಂದ ವಿವರಣೆ
  • ಶ್ರೀರಾಮನ ದರ್ಭೆಯ ಹಾಸಿಗೆಯನ್ನು ನೋಡಿ ಶೋಕಾವಿಷ್ಟನಾದ ಭರತನ ಉದ್ಗಾರ : ತಾನೂ ಜಟಾವಲ್ಕಧರನಾಗಿ ಅರಣ್ಯದಲ್ಲೇ ಇರುವ ನಿರ್ಧಾರ
  • ಭರತನು ಸೇನೆಯೊಡನೆ ಗಂಗಾನದಿಯನ್ನು ದಾಟಿ ಭರದ್ವಾಜರ ಆಶ್ರಮಕ್ಕೆ ತೆರಳಿದುದು
  • ಭರತ-ಭರದ್ವಾಜರ ಸಂಭಾಷಣೆ : ಆಶ್ರಮದಲ್ಲೇ ತಂಗಲು ಭರದ್ವಾಜರಿಂದ ಭರತನಿಗೆ ಆದೇಶ
  • ಭರದ್ವಾಜಮುನಿಗಳಿಂದ ಭರತನಿಗೂ ಮತ್ತು ಅವನ ಅಪಾರವಾದ ಸೈನ್ಯಕ್ಕೂ ದೇವಯೋಗ್ಯವಾದ ಸತ್ಕಾರ
  • ಭರತನು ಶ್ರೀರಾಮನ ಬಳಿಗೆ ಹೋಗಲು ಭರದ್ವಾಜರ ಅನುಮತಿಯನ್ನು ಪಡೆದು ಮುನಿಗಳಿಗೆ ತನ್ನ ತಾಯಂದಿರ ಪರಿಚಯ ಮಾಡಿಕೊಟ್ಟುದು : ಸೈನ್ಯಸಮೇತನಾಗಿ ಚಿತ್ರಕೂಟಪರ್ವತಕ್ಕೆ ಭರತನ ಪ್ರಯಾಣ
  • ಭರತನ ಚಿತ್ರಕೂಟಯಾತ್ರೆ
  • ಶ್ರೀರಾಮನು ಸೀತಾದೇವಿಗೆ ಚಿತ್ರಕೂಟದ ಸೊಬಗನ್ನು ವರ್ಣಿಸುತ್ತಾ ತೋರಿಸಿದುದು
  • ಶ್ರೀರಾಮನು ಸೀತೆಗೆ ಮಂದಾಕಿನೀ ನದಿಯನ್ನು ವರ್ಣಿಸಿ ಹೇಳಿದುದು
  • ಪ್ರಕ್ಷಿಪ್ತ ಸರ್ಗ : ಕಾಕಾಸುರನ ಕಥೆ
  • ವನ್ಯಮೃಗಗಳು ಭಯಗೊಂಡು ಓಡುತ್ತಿರುವುದನ್ನು ನೋಡಿ ಶ್ರೀರಾಮನು ಕಾರಣವನ್ನು ತಿಳಿಯಲು ಲಕ್ಷ್ಮಣನಿಗೆ ಹೇಳಿದುದು : ಲಕ್ಷ್ಮಣನು ಮರವನ್ನು ಹತ್ತಿ ಅಪಾರಸೈನ್ಯವನ್ನು ವೀಕ್ಷಿಸಿ ಭರತನು ತಮಗೆ ಕೇಡನ್ನು ಬಯಸಿಯೇ ಬಂದಿರುವನೆಂದು ಭಾವಿಸಿ ಕೋಪದಿಂದ ಉದ್ಗರಿಸಿದುದು
  • ಶ್ರೀರಾಮನು ಲಕ್ಷ್ಮಣನ ಕೋಪವನ್ನು ಶಾಂತಗೊಳಿಸುತ್ತಾ ಭರತನ ಸಾತ್ತ್ವಿಕತೆಯನ್ನು ವಿವರಿಸಿ ಹೇಳಿದುದು : ಪರ್ವತದ ಕೆಳಭಾಗದಲ್ಲಿ ಭರತನ ಸೈನ್ಯದ ಬಿಡಾರ
  • ಭರತನು ಶ್ರೀರಾಮನ ಪರ್ಣಶಾಲೆಯನ್ನು ಹುಡುಕಿದುದು : ಶ್ರೀರಾಮನ ದರ್ಶನ
  • ಭರತನು ಶತ್ರುಘ್ನನೇ ಮೊದಲಾದವರೊಡನೆ ಶ್ರೀರಾಮನ ಪರ್ಣಶಾಲೆಗೆ ಹೋದುದು : ಪರ್ಣಶಾಲೆಯನ್ನು ನೋಡಿ ಭರತನು ಬಿಕ್ಕಿ-ಬಿಕ್ಕಿ ಅಳುತ್ತಾ ಶ್ರೀರಾಮನ ಪಾದಗಳಲ್ಲಿ ಬಿದ್ದುದು : ಶ್ರೀರಾಮನು ಅವರೆಲ್ಲರನ್ನೂ ಆಲಿಂಗಿಸಿಕೊಂಡುದು
  • ಕುಶಲಪ್ರಶ್ನೆಯ ರೂಪದಲ್ಲಿ ಶ್ರೀರಾಮನು ಭರತನಿಗೆ ರಾಜನೀತಿಯನ್ನು ಉಪದೇಶಿಸಿದುದು
  • ಭರತನು ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನನ್ನು ಪ್ರಾರ್ಥಿಸುತ್ತಾ ತಂದೆಯು ಸ್ವರ್ಗಸ್ಥನಾದ ಸಮಾಚಾರವನ್ನು ತಿಳಿಸಿದುದು
  • ತಂದೆಯ ಮರಣವಾರ್ತೆಯನ್ನು ಕೇಳಿ ರಾಮನೇ ಮೊದಲಾದವರ ದುಃಖ : ತಂದೆಗಾಗಿ ಜಲಾಂಜಲಿಯನ್ನಿತ್ತು ಪಿಂಡಪ್ರದಾನಮಾಡಿದುದು
  • ವಸಿಷ್ಠರ ಜೊತೆಯಲ್ಲಿ ಹೊರಟ ಕೌಸಲ್ಯೆಯು ಮಂದಾಕಿನೀನದಿಯ ತೀರದಲ್ಲಿ ಬಹಳವಾಗಿ ದುಃಖಿಸಿದುದು : ರಾಮ-ಲಕ್ಷ್ಮಣ-ಸೀತೆಯರು ಕೌಸಲ್ಯೆಯೇ ಮೊದಲಾದ ತಾಯಂದಿರಿಗೂ ವಸಿಷ್ಠರಿಗೂ ಅಭಿವಂದಿಸಿದುದು
  • ಶ್ರೀರಾಮನು ಭರತನನ್ನು ಅರಣ್ಯಕ್ಕೆ ಬಂದುದರ ಕಾರಣವನ್ನು ಕೇಳಿದುದು : ರಾಜ್ಯವನ್ನು ಸ್ವೀಕರಿಸುವಂತೆ ಭರತನ ಪ್ರಾರ್ಥನೆ : ಶ್ರೀರಾಮನ ಅಸಮ್ಮತಿ
  • ರಾಜ್ಯವನ್ನು ಸ್ವೀಕರಿಸುವಂತೆ ಪುನಃ ಭರತನ ಒತ್ತಾಯ : ಶ್ರೀರಾಮನು ಜೀವನದ ಅನಿತ್ಯತೆಯನ್ನು ಪ್ರತಿಪಾದಿಸುತ್ತಾ ತಂದೆಯ ಅವಸಾನಕ್ಕಾಗಿ ದುಃಖಪಡದಂತೆ ಸಮಾಧಾನವನ್ನು ಹೇಳಿ ತಂದೆಯ ಆಜ್ಞೆಯನ್ನು ಪರಿಪಾಲಿಸುವ ಸಲುವಾಗಿಯೇ ರಾಜ್ಯಾಧಿಕಾರವನ್ನು ವಹಿಸುವುದಿಲ್ಲವೆಂದೂ ಅರಣ್ಯದಲ್ಲಿಯೇ ಇರುವುದಾಗಿಯೂ ಭರತನಿಗೆ ದೃಢಪಡಿಸಿದುದು
  • ಭರತನು ಶ್ರೀರಾಮನನ್ನು ಅಯೋಧ್ಯೆಗೆ ಹಿಂದಿರುಗಲು ಮತ್ತು ರಾಜ್ಯವನ್ನು ಸ್ವೀಕರಿಸಲು ಪುನಃ ಪ್ರಾರ್ಥಿಸಿದುದು
  • ಶ್ರೀರಾಮನು ಭರತನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹಿಂದಿರುಗುವಂತೆ ಆಜ್ಞಾಪಿಸಿದುದು
  • ಜಾಬಾಲಿಯು ನಾಸ್ತಿಕಮತವನ್ನಾಶ್ರಯಿಸಿ ಶ್ರೀರಾಮನನ್ನು ಸಮಾಧಾನಗೊಳಿಸಲು ಯತ್ನಿಸಿದುದು
  • ಶ್ರೀರಾಮನು ಜಾಬಾಲಿಯ ನಾಸ್ತಿಕವಾದವನ್ನು ಖಂಡಿಸಿದುದು
  • ವಸಿಷ್ಠರು ಸೃಷ್ಟಿಯ ಕ್ರಮವನ್ನೂ ಇಕ್ಷ್ವಾಕು ವಂಶದ ಪರಂಪರೆಯನ್ನೂ ತಿಳಿಸಿ ಜ್ಯೇಷ್ಠನೇ ರಾಜನಾಗಬೇಕೆಂಬುದರ ಔಚಿತ್ಯವನ್ನೂ ಹೇಳಿ ರಾಜ್ಯವನ್ನು ಸ್ವೀಕರಿಸುವಂತೆ ಶ್ರೀರಾಮನಿಗೆ ಸಲಹೆ ನೀಡಿದುದು
  • ವಸಿಷ್ಠರು ಸಮಾಧಾನಗೊಳಿಸಿದರೂ ಶ್ರೀರಾಮನು ಅಯೋಧ್ಯೆಗೆ ಬರಲು ಒಪ್ಪದಿರಲು ಭರತನು ರಾಮನ ಮುಂದೆ ನಿರಾಹಾರನಾಗಿ ಮಲಗಿದುದು : ಶ್ರೀರಾಮನು ಭರತನನ್ನು ಸಮಾಧಾನಗೊಳಿಸಿ ಅಯೋಧ್ಯೆಗೆ ಹೋಗಲು ಆಜ್ಞಾಪಿಸಿದುದು
  • ಶ್ರೀರಾಮನ ಆಜ್ಞೆಯಂತೆ ಅಯೋಧ್ಯೆಗೆ ಹಿಂದಿರುಗಲು ಋಷಿಗಳೂ ಭರತನಿಗೆ ಸಲಹೆ ನೀಡಿದುದು : ಪುನಃ ಭರತನು ಶ್ರೀರಾಮನ ಪಾದಗಳಲ್ಲಿ ಬಿದ್ದು ಅಯೋಧ್ಯೆಗೆ ಹಿಂದಿರುಗುವಂತೆ ಬೇಡಿಕೊಂಡುದು : ಶ್ರೀರಾಮನು ತನ್ನ ಪಾದುಕೆಗಳನ್ನು ಕೊಟ್ಟು ಸಮಾಧಾನಗೊಳಿಸಿ ಎಲ್ಲರನ್ನೂ ಕಳುಹಿಸಿಕೊಟ್ಟುದು
  • ಪರಿಶಿಷ್ಟ

Other Books in this COllection

ಸಂಪುಟ ೧

Volume 2

Volume 4

Volume 5

Volume 6

Volume 7

Volume 8

Volume 9

Volume 10

Volume 11